
10th June 2025
ಬಳ್ಳಾರಿ ಜೂ. ೦೯: ತುಂಗಭದ್ರಾ ಜಲಾಶಯಕ್ಕೆ ೧೯೫೩ ರಲ್ಲಿ ನರ್ಮಾಣ ಮಾಡಿ ಅಂದು ಆ ಜಲಾಶಯಕ್ಕೆ ೩೩ ಗೇಟುಗಳನ್ನು ಅಳವಡಿಸಿಲಾಗಿತ್ತು. ಆ ಗೇಟ್ಗಳನ್ನು ಅಳವಡಿಸಿ ಇಂದಿಗೆ ಸುಮಾರು ೭೨ ರ್ಷಗಳಾಗಿವೆ. ಈಗಾಗಲೇ ಗೇಟುಗಳ ಗುಣಮಟ್ಟ ಕಳೆದುಕೊಂಡು ಹಿಂದಿನ
ರ್ಷ ೧೯ನೇ ಗೇಟು ಮುರಿದು ಬಿದ್ದಾಗ ಗೇಟಿಗೆ ಸ್ಟಾಪ್ಲಾಗ್ ಅಳವಡಿಸಿ ರೈತರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು ಮತ್ತು ಮುಂದಿನ ರ್ಷಕ್ಕೆ ಎಲ್ಲಾ ೩೩ ಹೊಸ ಗೇಟುಗಳನ್ನು ಅಳವಡಿಸುತ್ತೇವೆ
ಎಂದು ತಿಳಿಸಿದ್ದೀರಿ, ಆದರೇ ಇದುವರೆಗೂ ಯಾವುದೇ ಗೇಟು ಅಳವಡಿಸಲಾಗಿಲ್ಲ ಈಗ ಅಳವಡಿಸಲು ಸಹ ಸಮಯವಿಲ್ಲ ವೃಥಾ ಸಮಯ ಹಾಳು ಮಾಡದೆ ೧೯ನೇ ಗೀತಂ ಸಹ ಮುಂದಿನ ರ್ಷದಲ್ಲಿ ಎಲ್ಲಾ ೩೩ ಗೇಟು ಅಳವಡಿಸುವ ಸಂರ್ಭದಲ್ಲಿ ಅದನ್ನು ಅಳವಡಿಸಿರಿ, ಈಗ ಜಲಾಶಯದಲ್ಲಿ ೨೫ಣmಛಿ ನೀರು ಸಂಗ್ರಹಗೊಂಡ ತಕ್ಷಣ ಕಾಲುವೆಗಳಿಗೆ ಬಿಡುಗಡೆ ಮಾಡಿ ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರು ಪುರುಷೋತ್ತಮ್ ಗೌಡ ಟಿಬಿ ಬರ್ಡ್ ಅನ್ನು ಒತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಸಲ್ಲಿಸಿ ಮಾತನಾಡಿ, ಈಗಾಗಲೇ ತುಂಗಭದ್ರ ಜಯಲಾಶಯದಲ್ಲಿ ೨೨ ಟಿ.ಎಮ್.ಸಿ ನೀರು ಶೇಖರಣೆ ಆಗಿದ್ದು
ಜಲಾಶಯಕ್ಕೆ ಸತತವಾಗಿ ನೀರು ಹರಿದು ಬರುತ್ತದೆ. ತಜ್ಞರ ಸಮೀತಿಯು ಈ ರ್ಷ ೮೦% ಮಾತ್ರ ಜಲಾಶಯದಲ್ಲಿ
ನೀರಿನ ಶೇಖರಣೆ ಮಾಡುತ್ತೇವೆ ಎಂದು ತಿಳಿಸಿರುವುದರಿಂದ ಬಳ್ಳಾರಿ ವಿಜಯನಗರ, ಕೊಪ್ಪಳ
ಹಾಗೂ ರಾಯಚೂರು ಜಿಲ್ಲೆಗಳ ರೈತರು ಆತಂಕ ಗೊಂಡಿದ್ದಾರೆ ಮಾನ್ಯ ಸಚಿವರು ಒಂದು ನರ್ಧಾರವನ್ನು ಕೈಗೊಂಡು ರೈತರ ಆತಂಕವನ್ನು ದೂರ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
ಪುದುಚೇರಿ ವಿಧಾನಸಭೆಗಾಗಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ಓeಗಿಂ) ಡಿಜಿಟಲ್ ಪ್ಲಾಟ್ಫರ್ಮ್ ಅನ್ನು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಉದ್ಘಾಟಿಸಿದರು